ಕನ್ನಡ, ಕಂಪ್ಯೂಟರ್ ಮತ್ತು ಕೆ. ಪಿ. ರಾವ್


ಕನ್ನಡ ವಿಶ್ವವಿದ್ಯಾನಿಲಯದಿಂದ ಇತ್ತೀಚೆಗೆ 'ನಾಡೋಜ' ಗೌರವ ಪಡೆದ ಶ್ರೀ ಕೆ. ಪಿ. ರಾವ್, ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು.

ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ರೂಪಿಸಿದ್ದು ಅವರ ಸಾಧನೆ. ಅಷ್ಟೇ ಅಲ್ಲ, ೧೯೮೦ರ ದಶಕದಲ್ಲೇ ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆಯೂ ಅವರದ್ದೇ.

ಅವರ ಜೀವನ-ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕವೊಂದು ಇಷ್ಟರಲ್ಲೇ ಹೊರಬರಲಿದೆ. ಇಜ್ಞಾನ ಡಾಟ್ ಕಾಮ್‌ನ   ಟಿ. ಜಿ. ಶ್ರೀನಿಧಿ ಬರೆದ ಈ ಪುಸ್ತಕವನ್ನು ಬೆಂಗಳೂರಿನ ಉದಯಭಾನು ಕಲಾಸಂಘ ಪ್ರಕಟಿಸುತ್ತಿದೆ.

Comments

Popular posts from this blog

ಇ ಆರ್ ಪಿ ಲೋಕ

ಬಿಟ್‌ನಿಂದ ಎಕ್ಸಾಬೈಟ್‌ವರೆಗೆ

E, H, H+ ಇದೆಲ್ಲ ಏನು?