ಹುಲಿ ಉಳಿಸುವ ದಾರಿ

ಇಜ್ಞಾನ ವಾರ್ತೆ


ಹೆಸರಾಂತ ವನ್ಯಜೀವಿ ಚಿತ್ರನಿರ್ಮಾಪಕ ಶ್ರೀ ಶೇಖರ್ ದತ್ತಾತ್ರಿಯವರು ನಿರ್ಮಿಸಿರುವ 'ದ ಟ್ರುಥ್ ಅಬೌಟ್ ಟೈಗರ್ಸ್' ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿ ಇಂದು (ಸೆಪ್ಟೆಂಬರ್ ೬) ಸಂಜೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆಯಾಯಿತು. ಅಳಿವಿನಂಚಿನಲ್ಲಿರುವ ಭಾರತದ ರಾಷ್ಟ್ರಪ್ರಾಣಿ ಹುಲಿಯನ್ನೂ, ಅದರ ನೈಜ ನೆಲೆಗಳನ್ನೂ ಸಂರಕ್ಷಿಸುವ ಅಗತ್ಯ ಮತ್ತು ಅದಕ್ಕಾಗಿ ಅನುಸರಿಸಬೇಕಾದ ಕ್ರಮಗಳನ್ನು ಈ ಸಾಕ್ಷ್ಯಚಿತ್ರ ನಿರೂಪಿಸುತ್ತದೆ. ಈ ಪರಿಣಾಮಕಾರಿ ಚಿತ್ರವನ್ನು 'ಹುಲಿ ಉಳಿಸುವ ದಾರಿ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವವರು ಶ್ರೀ ಟಿ. ಎಸ್. ಗೋಪಾಲ್ ಹಾಗೂ ಡಾ| ಕೆ. ಉಲ್ಲಾಸ ಕಾರಂತ.

ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದ ಈ ಚಿತ್ರ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು www.truthabouttigers.org ಜಾಲತಾಣದಲ್ಲಿ ಪಡೆಯಬಹುದು. ಅಷ್ಟೇ ಅಲ್ಲ, ಸಂಪೂರ್ಣ ಸಾಕ್ಷ್ಯಚಿತ್ರವನ್ನು ಯುಟ್ಯೂಬ್‌ನಲ್ಲಿ (www.youtube.com/truthabouttigers) ಮುಕ್ತವಾಗಿ ವೀಕ್ಷಿಸಲೂಬಹುದು.

Comments

Popular posts from this blog

ಇ ಆರ್ ಪಿ ಲೋಕ

ಬಿಟ್‌ನಿಂದ ಎಕ್ಸಾಬೈಟ್‌ವರೆಗೆ

E, H, H+ ಇದೆಲ್ಲ ಏನು?