ಡಿಸೆಂಬರ್ ೨೪,೨೫ರಂದು 'ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ' ವಿಚಾರಗೋಷ್ಠಿ

ಇಜ್ಞಾನ ವಾರ್ತೆ

ಬೆಂಗಳೂರಿನ ಉದಯಭಾನು ಕಲಾಸಂಘ ಈ ವಾರಾಂತ್ಯದಲ್ಲಿ (೨೦೧೧ರ ಡಿಸೆಂಬರ್ ೨೪, ೨೫) 'ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ' ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಿದೆ. ಬಸವನಗುಡಿ ನ್ಯಾಷನಲ್ ಕಾಲೇಜಿನ ಡಾ. ಎಚ್. ಎನ್. ಮಲ್ಟೀಮೀಡಿಯಾ ಹಾಲ್‌ನಲ್ಲಿ ಈ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ.

ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಪ್ರೊ. ಎಂ. ಆರ್. ನಾಗರಾಜು, ಡಾ| ಪಿ. ಎಸ್. ಶಂಕರ್, ಡಾ| ಕೆ. ಎನ್. ಗಣೇಶಯ್ಯ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ, ಡಾ| ನಾ. ಸೋಮೇಶ್ವರ ಸೇರಿದಂತೆ ಅನೇಕ ತಜ್ಞರ ಮಾತುಗಳನ್ನು ಕೇಳುವ ಅವಕಾಶ ಈ ಸಂದರ್ಭದಲ್ಲಿ ಒದಗಿಬರಲಿದೆ. ಚರ್ಚೆಯ ಪ್ರವರ್ತನೆಯನ್ನು ಶ್ರೀ ಟಿ. ಆರ್. ಅನಂತರಾಮು ಹಾಗೂ ಶ್ರೀ ನಾಗೇಶ ಹೆಗಡೆಯವರು ಮಾಡಲಿದ್ದಾರೆ. ವಿಚಾರಗೋಷ್ಠಿಯ ಪ್ರಬಂಧಗಳ ಸಂಗ್ರಹವನ್ನು ಪುಸ್ತಕರೂಪದಲ್ಲೂ ಬಿಡುಗಡೆ ಮಾಡಲಾಗುವುದು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಲ್ಲಿದೆ.

Comments

Popular posts from this blog

ಏನಿದು 'ಫ್ಲೈಟ್ ಮೋಡ್'?

ಫೈಲ್ ರಿಕವರಿ ಮಾಡುವುದು ಹೀಗೆ...

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ